ಕನಸು

ಓರ್ವ ವಿರಹಿ ಪ್ರೇಮಿಗೆ ದಿನವೂ ಒಂದು ಕನಸು ಬೀಳುತ್ತಿತ್ತು. ಅವನು ತನ್ನ ಪ್ರೀತಿ ಪುತ್ಥಳಿಯನ್ನು ಹಿಂಬಾಲಿಸಿ ನಡೆಯುತ್ತಲೇ ಇದ್ದ. ಮೈಲಿ ಮೈಲಿಗೂ ಅವಳು ನಿಂತಂತೆ ಅನಿಸಿ ಮತ್ತೆ ಮುಂದೆ ಸಾಗುತ್ತಿದ್ದಳು. ಅದೇ ವೇಗದಲ್ಲಿ ಅವನೂ ಸಾಗುತ್ತಿದ್ದ. ಕನಸಿನ ಹಾದಿಯಲ್ಲಿ ಪ್ರೀತಿಯ ಸೆರಗು ಹಾರಿ ಹಾರಿ ನಡಿಗೆ ಮುಂದುವರಿಸಲು ಕರೆ ನೀಡುತ್ತಿತ್ತು. ಎಚ್ಚೆತ್ತು ದಿನದ ಬೆಳಗಲ್ಲಿ ಅದೇ ಹಾದಿಯಲ್ಲಿ ಪ್ರೀತಿ ಹುಡುಕಿ ಸಾಗಿದ. ಅವನಿಗೆ ಕಂಡದ್ದು ಮೈಲಿ ಮೈಲಿಗೂ ದಿಟ್ಟ ನಿಲುವಲ್ಲಿ ನಿಂತ ಮೈಲಿ ಗಲ್ಲುಗಳು. ಅವುಗಳ ನಿಲುವಿನ ಬಿಂಬದಲ್ಲಿ ಅವನು ಕಂಡದ್ದು ತಾಯಿ, ತಂದೆ, ಅಕ್ಕ, ತಂಗಿ, ಅಣ್ಣ, ತಮ್ಮ, ಬಂಧುಬಳಗ ಮತ್ತೂ ತನ್ನ ಪ್ರೇಯಸಿಯನ್ನು. ಇವರೆಲ್ಲರೂ ತನ್ನ ಬಾಳಿನುದ್ದಕ್ಕೂ ನಡೆಸಿದ ಮೈಲಿಗಲ್ಲುಗಳಲ್ಲವೇ? ಎಂಬ ಅರಿವು ಪ್ರೇಯಸಿಯ ವಿರಹಕ್ಕೆ ತಂಪೆರಚಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಂಕಿ
Next post ಹೇಗೋ ನನಗೆ ತಿಳಿದಹಾಗೆ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys